ತಲ್ಲಣ

ಎಲ್ಲಾ ಹಕ್ಕಿಗಳು ಹಾರಿ ಹೋದವು
ಬರಡು ಮರದಲಿ ಹಸಿರು ಕಾಣದೆ
ಎಲ್ಲಾ ಚಿಕ್ಕಿಗಳು ಮಾಯವಾದವು
ಪ್ರೀತಿ ಕಳೆದ ನೀಲಿ ಆಗಸದಲಿ.

ಅಂಬರದ ಮುನಿಸಿಗೆ ತೆರೆಯಲಿಲ್ಲ
ಅರಿವಿನ ರೆಕ್ಕೆಗಳು ಪಟಪಟ
ಅಕ್ಷಗುಂಟ ಇಳಿದ ಹನಿಗಳು
ಮೋಡವಾಗಲಿಲ್ಲ ಬಿರು ಬಿಸಿಲಿನಲಿ.

ಹಾರಿ ಹೋದ ಹಕ್ಕಿಯ ರೆಕ್ಕೆಯ ನೆರಳು
ನೆತ್ತಿ ಸವರಲಿಲ್ಲ ಇಳಿ ಸಂಜೆಯಲಿ
ಕೌನೆರಳಿನ ಕೌದಿಯ ಅಡಿಯಲಿ
ಮುದುಡಿ ಮಂಕಾಯಿತು ಚಿಕ್ಕಿ ಮಿನುಗುಗಳು.

ಹಕ್ಕಿ ಚಿಕ್ಕಿ ಬಂಧ ಅನುಬಂಧಕೆ
ಪ್ರೇಮ ಕಾವ್ಯ ಅರಳಲಿಲ್ಲ ಶಬ್ದಗಳಲಿ
ಮನದಾಚೆಯ ಮಾತುಗಳು ಪದಗಳಾಗಲಿಲ್ಲ
ನಾ ನೀ ಎದುರು ಬದರು ಕುಳಿತಾಗ.

ಯಾವ ಎಳೆಗಳಲಿ ಪೋಣಿಸಲಿ ಚಿಕ್ಕಿಗಳ
ಯಾವ ಹಾಯಲಿ ತೇಲಿಸಾಲಿ ಹಕ್ಕಿಗಳ
ಆಲಯ ಬಯಲಲಿ ಭಾವ ಅನುಭಾವದ
ಕಾರ್ತೀಕ ಹೇಗೆ ಬೆಳಗಲಿ ವಸಂತ ಚಿಗುರಿಸಲಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಾಣಿ – ಪಕ್ಷಿಗಳ ನಿದ್ರೆಯ ವಿಭಿನ್ನ ಕ್ರಮ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೫೫

ಸಣ್ಣ ಕತೆ

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

cheap jordans|wholesale air max|wholesale jordans|wholesale jewelry|wholesale jerseys